ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜೂನ್ 11, 2015

ಮಹಿಳೆಯರು ನಡೆಸಿದ ಅಗ್ನಿಹೋತ್ರ - ಬಿಟಿವಿ ವರದಿ

     ದಿನಾಂಕ 31.5.2015ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ವಂದೇಮಾತರಮ್ ಹೋಟೆಲಿನ ಸಭಾಂಗಣದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು 'ವೇದಚಿಂತನ ಗೋಷ್ಠಿ' ನಡೆಸಿದರು, ಸಂದೇಹಗಳಿಗೆ ಉತ್ತರಿಸಿದರು. ಹಾಸನದ ವೇದಭಾರತಿಯಿಂದ ಆಯೋಜಿತವಾಗಿದ್ದ ಈ ಕಾರ್ಯಕ್ರಮದ ಆರಂಭದಲ್ಲಿ ವೇದಭಾರತಿಯ ಮಹಿಳಾ ಸದಸ್ಯರು ಅಗ್ನಿಹೋತ್ರ ಮಾಡಿದರು. ಇದನ್ನು ಬಿ ಟಿವಿ ಸುದ್ದಿಯಾಗಿ ಬಿತ್ತರಿಸಿತು. ಸುದ್ದಿಯಲ್ಲಿ ಮಹಿಳೆಯರು ಪೌರೋಹಿತ್ಯ ಮಾಡಲು ಮುಂದೆ ಬಂದಿರುವ ಬಗ್ಗೆ ಸುದ್ದಿ ವಾಚಕಿ ಶ್ಲಾಘಿಸಿ ಮಾತನಾಡಿದರು. ವೇದಾಭ್ಯಾಸಕ್ಕೂ, ಪೌರೋಹಿತ್ಯಕ್ಕೂ ಸಂಬಂಧ ಕಲ್ಪಿಸುವ ಇಂದಿನ ರೂಢಿಗತ ತಿಳುವಳಿಕೆಯಿಂದ ಆಕೆ ಮಾತನಾಡಿರಬಹುದು. ವೇದಾಭ್ಯಾಸ ಅಂದರೆ ಕೇವಲ ಪೂಜಾಮಂತ್ರಗಳಷ್ಟೇ ಅಲ್ಲ ಎಂಬ ಬಗ್ಗೆ ಇನ್ನೂ ಜನರಿಗೆ ಅರಿವಾಗಬೇಕಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ