ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 5, 2013

ವೇದೋಕ್ತ ಜೀವನ ಪಥ: ಮಾನವಧರ್ಮ - ೨

ಅಥರ್ವವೇದ ಕೂಗಿ ಕೂಗಿ ಹೇಳುತ್ತಲಿದೆ:-
ಉತ್ಕ್ರಾಮಾತಃ ಪುರುಷ ಮಾವ ಪತ್ಥಾ ಮೃತ್ಯೋಃ ಪಡ್ವೀಶಮವಮುಂಚಮಾನಃ |
ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇಃ ಸೂರ್ಯಸ್ಯ ಸಂದೃಶಃ || (ಅಥರ್ವ.೮.೧.೪.)
     [ಪುರುಷ] ಹೇ ದೇಹನಿವಾಸೀ ಜೀವ! [ಮೃತ್ಯೋಃ ಪಡ್ವೀಷಂ ಅವಮುಂಚಮಾನಃ] ಸಾವಿನ ಬಂಧವನ್ನು ಕೆಳಕ್ಕೆ ಸರಿಸಿ ಹಾಕುತ್ತಾ, [ಆತಃ ಉತ್ಕ್ರಾಮ] ಇಲ್ಲಿಂದ ಮೇಲಕ್ಕೆದ್ದು ನಡೆ. [ಮಾ ಅವ ಪತ್ಥಾ] ಕೆಳಗೆ ಬೀಳಬೇಡ. [ಅಸ್ಮಾತ್ ಲೋಕಾತ್] ಈ ಲೋಕದಿಂದ, [ಮಾ ಚ್ಛಿತ್ಥಾ] ಕಡಿದು ಹೋಗಬೇಡ. [ಅಗ್ನೇಃ] ರಾತ್ರಿಯಲ್ಲಿ ಅಗ್ನಿಯ, [ಸೂರ್ಯಸ್ಯ] ಹಗಲಿನಲ್ಲಿ ಸೂರ್ಯನ, [ಸಂದೃಶಃ] ಸಮಾನವಾಗಿ ಪ್ರಕಾಶಿಸು.
     ಒಂದೊಂದು ಶಬ್ದವೂ ಸ್ಫೂರ್ತಿಯ ಬುಗ್ಗೆ! ಮಾನವ, ಸಾವಿನ ಭಯವನ್ನು ದೂರ ಸರಿಸಿ, ಮೇಲಕ್ಕೇರಬೇಕು, ಕೆಳಕ್ಕೆ ಬೀಳಬಾರದು. ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ, ಲೌಕಿಕ ಕರ್ತವ್ಯಗಳಿಂದ ದೂರ ಓಡಬಾರದು, ಜೀವನದ ರಾತ್ರಿಯಲ್ಲಿ ಅಂದರೆ ದುಃಖಮಯ ಸ್ಥಿತಿಯಲ್ಲಿ, ಬೆಂಕಿಯಂತೆ ಉರಿದು ದುಃಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ, ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ, ಎಲ್ಲರಿಗೂ ಆ ಸುಖವನ್ನು ಹಂಚಿಕೊಡಬೇಕು. ಇದೀಗ ಧರ್ಮಮಾರ್ಗದ, ಉತ್ಥಾನ ಮಾರ್ಗದ ಒಂದು ಆಕರ್ಷಕವಾದ ಚಿತ್ರ.
*******************************
-ಪಂ. ಸುಧಾಕರ ಚತುರ್ವೇದಿ.
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2011/04/blog-post_26.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ